Saturday, June 23, 2012

ಗಂದಾ ಹೈ, ಮಗರ್ ಧಂದಾ ಹೈ



ಡರ್ಟಿ ಪಿಕ್ಚರ್ ಚಿತ್ರದ ಬಗ್ಗೆ ಬಹಳ ಕೇಳಿದ್ದೆ....ವಿದ್ಯಾ ಬಾಲನ್ ಉತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಾಗಲಂತೂ ಚಿತ್ರ ನೋಡಲೇಬೇಕೆಂದುಕೊಂಡೆ... ನೆನ್ನೆ ರಾತ್ರಿ ಎಲ್ಲ ಕೆಲಸ ಬದಿಗೊತ್ತಿ ನಿದ್ದೆ ಹಾಳು ಮಾಡಿಕೊಂಡು ಚಿತ್ರ ನೋಡಲು ಕುಳಿತೆ... ನೋಡಿದ ಮೇಲೆ ಅನಿಸಿದ್ದಿಷ್ಟೇ....''21 ನೆ ಶತಮಾನದ ಈ ಮುಂಬಾಗಿಲಿನಲ್ಲಿ ಮಾರಾಟ ಮಾಡುವ ಕಲೆಯನ್ನು ಬಲ್ಲವನೇ ರಾಜ...ಗೆದ್ದೊನೇ ಬಾಸು ... ಹೇಗೆ ಗೆದ್ದೇ ಅನ್ನುವುದು ಮುಖ್ಯ ಅಲ್ಲ..''


ಡರ್ಟಿ ಪಿಕ್ಚರ್ ಚಿತ್ರದಲ್ಲಿ ಸಿಲ್ಕ್ ಸ್ಮಿತಾಳ ಜೀವನದ ಸತ್ಯ ಕಥೆ ಇದೆ...ಎಂದು ಬಿಂಬಿಸಿ ಪ್ರಚಾರ ಪಡೆಯಲಾಯಿತು,.. ಆ ಹೆಸರು ಸಮಸ್ಯೆ ತರುತ್ತೆ ಅಂತ ಗೊತ್ತಾದಾಗ... ನಮ್ಮ ಚಿತ್ರದಲ್ಲಿ ಅವಳ ಕಥೆ ಇಲ್ಲ.. ಇದು ಬರೀ ಕಾಲ್ಪನಿಕ ಅಂತ ತಿಪ್ಪೆ ಸಾರಿಸಲಾಯಿತು... ಅನಾವಶ್ಯಕವಾಗಿ... ಸಿಲ್ ಸ್ಮಿತಾ ಹೆಸರು ಹೇಳಿಕೊಂಡು ಪ್ರಚಾರ ಪಡೆದ ಈ ಸಿನೆಮಾದ ಮಾಸ್ಟರ್ ಮೈಂಡ್ ಏಕ್ತಾ ಕಪೂರ್... ತಾನು ಒಬ್ಬ ಯಾವುದೇ ಮುಲಾಜು...ಮೌಲ್ಯ...ನಾಚಿಕೆ ಇಲ್ಲದ ವ್ಯಾಪಾರಸ್ಥಳು ಎಂಬುದನ್ನು ಇನ್ನೊಮ್ಮೆ ಸಾಬೀತು ಮಾಡಿದ್ದಾಳೆ. ಕಾಲ್ಪನಿಕ ಅಂತ ಹೇಳಿಕೊಂಡರೂ ಅನಾವಶ್ಯಕವಾಗಿ ಸಿಲ್ಕ್ ಎನ್ನುವ ಹೆಸರನ್ನು ಚಿತ್ರದಲ್ಲಿ ಪಾತ್ರಕ್ಕೆ ಇಡಲಾಗಿದೆ... ವಾಸ್ತವವಾಗಿ ಆಂಧ್ರ ಪ್ರದೇಶದ ರಜಮಂದ್ರಿ ಬಳಿಯ ಹಳ್ಳಿಯ ಹುಡುಗಿಯಾದ ಸಿಲ್ಕ್ ಸ್ಮಿತಾಳನ್ನು ಒಬ್ಬ ತಮಿಳು ಹುಡುಗಿ ಎಂದು ತೋರಿಸಲಾಗಿದೆ... ಕಥೆಯಲ್ಲಿ ಅವಳ ಜೀವನದ ಏಳು- ಬೀಳು... ಯಾವುದನ್ನೂ ಸರಿಯಾಗಿ ದಾಖಲಿಸಿಲ್ಲ... ಸಿಲ್ಕ್ ತಮಿಳಿಗಿಂತ ತೆಲುಗು ಚಿತ್ರಗಳಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಳು.... ಅನೇಕ ಉತ್ತಮ ಪಾತ್ರಗಳನ್ನೂ ಕೂಡ ಮಾಡಿದ್ದಳು...ಚಿರಂಜೀವಿಯಂತಹ ನಟ ಸಹ ಸಿಲ್ಕ್ ಅಭಿನಯವನ್ನು ಮೆಚ್ಚಿ ಉತ್ತಮ ಪಾತ್ರ ಕೊಡಿಸಿದ್ದ...ಅವಳು ಹಿಂದಿ ಚಿತ್ರಗಳಲ್ಲಿಯೂ ಕುಣಿದಿದ್ದಾಳೆ...ಒಟ್ಟು ಎಂಟು ಭಾಷೆಗಳಲ್ಲಿ ಮುನ್ನೂರ ಐವತ್ತು ಚಿತ್ರಗಳಲ್ಲಿ ನಟಿಸಿದ್ದಾಳೆ ಕುಣಿದಿದ್ದಾಳೆ... ಇದ್ಯಾವುದರ ಬಗ್ಗೆಯೂ ಚಿತ್ರದಲ್ಲಿಲ್ಲ..ಅವಳನ್ನು ಮತ್ತು ಅವಳ ದುಡ್ಡನ್ನು ಅನೇಕರು ಕಿತ್ತು ತಿಂದರು.. ಅವಳಿಗೆ ಉತ್ತಮ ಸ್ನೇಹಿತೆಯರಂಥ ಸಹಾಯಕಿಯರು ಇದ್ದರು..ಮನೆ ಕೆಲಸದವರು ಇದ್ದರು..ಆದರೆ ಇದ್ಯಾವುದೂ ಚಿತ್ರದಲ್ಲಿಲ್ಲ. ಕೇವಲ ನಾಲ್ಕೈದು ಪಾತ್ರಗಳ ನಡುವೆಯೇ ಕಥೆ ಮುಗಿದು ಹೋಗುತ್ತದೆ.....ನಿಜವಾಗಿಯೂ ಸಿಲ್ಕ್ ಸ್ಮಿತಾಳ ಜೀವನ ಒಬ್ಬ ಉತ್ತಮ ನಿರ್ದೇಶಕನ ಕೈಗೆ ಸಿಕ್ಕಿದ್ದರೆ ಅದ್ಭುತ ಚಿತ್ರವಾಗಬಹುದಾಗಿತ್ತು... ಆದರೆ ಮಿಲನ್ ಲೂಥರಿಯ....ಬರೀ ಗಿಮಿಕ್ ರಾಜ....ಅವರ ಹಿಂದಿನ ಚಿತ್ರ..ಒನ್ಸ್ ಅಪಾನ್ ಅ ಟೈಮ್ ಇನ್ ಮುಂಬೈ ಚಿತ್ರ ಕೂಡ....ವಾಸ್ತವಕ್ಕೆ ದೂರವಾಗಿದ್ದರೂ...ಮುಂಬೈ ಭೂಗತ ದೊರೆಗಳ ಕಥೆ ಎನ್ನುವ ಗಿಮಿಕ್ ಮಾಡಿ...ದುಡ್ಡು ಬಾಚಿದ್ದರು... ಇಲ್ಲಿ ಸಿಲ್ಕ್ ಸ್ಮಿತಾಳ ಕಥೆಯೂ ಪೂರ್ಣವಾಗಿ ಹೇಳಿಲ್ಲ...ಮತ್ತು ಇವರು ಕಾಲ್ಪನಿಕ ಎಂದು ಹೇಳಿಕೊಳ್ಳುವ ಕಥೆಗೂ ತಲೆ ಬುಡ.. ಇಲ್ಲ... ಆದರೆ ವಿದ್ಯಾ ಬಾಲನ್ ನಂತಹ ಮಡಿವಂತ ನಟಿಯ ಬಟ್ಟೆ ಬಿಚ್ಚಿಸಿ ಅದನ್ನೇ ತಮ್ಮ ಪ್ರಚಾರದ ತಿರುಳನ್ನಾಗಿಸಿ... ಸಿಲ್ಕ್ ಹೆಸರು ಉಪಯೋಗಿಸಿ.... ಹೆಸರು ದುಡ್ಡು ಎಲ್ಲ ಬಾಚಿದರು.... ಈ ಚಿತ್ರದಲ್ಲಿ ಒಂದು ಡೈಲಾಗ್ ಇದೆ...''ಸಭ್ಯರ ಮರ್ಯಾದೆ ಬೀದಿ ಪಾಲಾದರೆ ಜಾಸ್ತಿ ಸಂತೋಷ ಪಡುವವರು ಉಳಿದ ಸಭ್ಯರೇ'' ಆ ಮಾತು ಅಕ್ಷರಶಃ ಸತ್ಯ.. ಯಾಕೆಂದರೆ.. ಎಷ್ಟೋ ಜನ ಬಿಚ್ಚಮ್ಮಗಳು ಪ್ರಪಂಚದಲ್ಲಿ ಇದ್ದರೂ..ವಿದ್ಯಾ ಬಾಲನ್ ಬಟ್ಟೆ ಬಿಚ್ಚಿದ್ದಾಳೆ ಎನ್ನುವ ಕಾರಣಕ್ಕೆ ಅದನ್ನು ನೋಡಿದ ನಮ್ಮ ಭಾರತದ ಸಭ್ಯಸ್ಥರು ಅದನ್ನು ಸೂಪರ್ ಹಿಟ್ ಚಿತ್ರವನ್ನಾಗಿಸಿದ್ದಾರೆ..
ಒಟ್ಟಿನಲ್ಲಿ ಮಾರ್ಕೆಟಿಂಗ್ ತಿಳಿದ ಏಕ್ತಾ ಕಪೂರ್... ದುಡ್ಡು ಬಾಚಿದರೆ.. ವಿದ್ಯಾ ಪ್ರಶಸ್ತಿ ಪಡೆದಿದ್ದಾಳೆ... ಅನಗತ್ಯವಾಗಿ ಸಿಲ್ಕ್ ಎಂಬ ಹೆಣ್ಣು ಮಗಳ ಹೆಸರಿಗೆ ಮಸಿ ಬಡಿದಿದ್ದಾರೆ.. ಪ್ರಶ್ನಿಸುವ ಸೌಜನ್ಯ ಸಮಯ... ನಮ್ಮ ಭಾರತದ ಬುದ್ದಿ ಜೀವಿಗಳಿಗೆ ಇಲ್ಲ...
 

No comments:

Post a Comment