ಈ ಬಾರಿಯ ಕಾನ್ಸ್ ಚಿತ್ರೋತ್ಸವದ critic's week ನಲ್ಲಿ ಪ್ರದರ್ಶನಗೊಂಡು
ಬಹಳ ಪ್ರಶಂಸೆಗಳನ್ನು ಪಡೆದಿದ್ದ ಹಿಂದೀ ಚಿತ್ರ ''ಲಂಚ್ ಬಾಕ್ಸ್'' ಉತ್ತಮ ನಿರೀಕ್ಷೆಗಳ
ಜೊತೆಗೇ, ಸೂಕ್ತ ಪ್ರಚಾರದೊಂದಿಗೆ ಬಿಡುಗಡೆಯಾಗಿದೆ. ಮುಂಬೈನ ಮಧ್ಯಮವರ್ಗದ ನೌಕರಿದಾರ
ಜೀವನದ ಅಂಗವಾಗಿ ಹೋಗಿರುವ ಡಬ್ಬಾವಾಲಾಗಳು ಮನೆಗಳಿಂದ ಮಧ್ಯಾನ್ಹದ ಊಟದ ಡಬ್ಬಿಯನ್ನು
ಅವುಗಳ ಯಜಮಾನರು ಕೆಲಸ ಮಾಡುವ ಕಛೇರಿಗಳಿಗೆ ತಲುಪಿಸುವ ವ್ಯವಸ್ಥೆ ಅತ್ಯಂತ ಜನಪ್ರಿಯ.
ಅಪಾರ್ಟಮೆಂಟ್ ನಲ್ಲಿ ವಾಸಿಸುವ ಗೃಹಿಣಿಯೊಬ್ಬಳು ತನ್ನ ಗಂಡನಿಗಾಗಿ ಕಳಿಸುವ ಊಟದ ಡಬ್ಬಿ
ಒಂದು ದಿನ ತಲುಪಬೇಕಾದ ಜಾಗ ಬಿಟ್ಟು ಬೇರೆ ವ್ಯಕ್ತಿಯ ಬಳಿಗೆ ಬಂದು ಸೇರುತ್ತದೆ. ಆ
ಗೃಹಿಣಿಗೂ ಮತ್ತು ಒಬ್ಬ ಇಳಿವಯಸ್ಸಿನ ವಿದುರ ವ್ಯಕ್ತಿಗೂ ಮಧ್ಯದ ಪತ್ರಸಂವಾದಕ್ಕೆ ಅವಕಾಶ
ಮಾಡಿಕೊಡುವ ಆ ಲಂಚ್ ಬಾಕ್ಸ್ ಅವರಿಬ್ಬರ ಜೀವನಗಳನ್ನು ಪರಸ್ಪರರಿಗೆ ಪರಿಚಯಿಸುತ್ತದೆ. ಆ
ಲಂಚ್ ಬಾಕ್ಸ್ ಅನ್ನು ಸರಿಯಾದ ವಿಳಾಸಕ್ಕೆ ತಲುಪುವಂತೆ ಮಾಡುವ ಅವಕಾಶವಿದ್ದಾಗಿಯೂ ತನ್ನ
ಅಡುಗೆಯ ರುಚಿಯನ್ನು ಮೆಚ್ಚಿಕೊಂಡನೆಂಬ ಒಂದೇ ಕಾರಣಕ್ಕೆ ಆಕೆ ಆ ಡಬ್ಬಿಯ ಒಳಗಿನ
ಪತ್ರಸಂವಾದನ್ನು ಮುಂದುವರೆಸುತ್ತಾಳೆ. ಅವರಿಬ್ಬರೂ ಊಟದ ದಡಬ್ಬಿಯಲ್ಲಿ ಪತ್ರದಿಂದ
ಮುಂದುವರೆದು, ಟೆಲಿಫೋನ್.. ಮೊಬೈಲ್ ಫೋನ್ ಮುಂತಾದ ಸಂಪರ್ಕ ಸಾಧನಗಳನ್ನು ಬಳಸಿಕೊಳ್ಳದೇ
ಇರಲು ಕಾರಣ ಇಬ್ಬರಿಗೂ ಇರುವ ಸಾಮಾಜಿಕ ಸಂಕೋಚ ಮತ್ತು ಕಡಿಮೆ ಮಾತಿನ ಸ್ವಭಾವಗಳಾದರೂ
ಚಿತ್ರದ ಪ್ರಧಾನ ವಿಷಯಗಳ ನಿರೂಪಣೆಯಲ್ಲಿ ಆ ಲಂಚ್ ಬಾಕ್ಸ್ ಪ್ರಧಾನ
ಕೊಂಡಿಯಾಗಿರುವುದರಿಂದ ಇಲ್ಲಿ ತರ್ಕ ಮಾಡುವುದು ಮೂರ್ಖತೆಯಾಗುತ್ತದೆ.
ಕಳೆದೆರಡು ದಶಕಗಳಲ್ಲಿ ಬೆಂಗಳೂರು ಎಷ್ಟೇ ದೊಡ್ಡ ಮಹಾನಗರವಾಗಿ ಬೆಳೆದು ನಿಂತಿದ್ದರೂ ಕೂಡ ಮುಂಬೈ ನಗರದ ಲೋಕಲ್ ಟ್ರೈನ್, ಡಬ್ಬಾವಾಲಾಗಳು, ಚಾಳ್ ಗಳು ಮುಂತಾದ ಅನೇಕ ಸಂಗತಿಗಳು ಇಲ್ಲಿನವರಿಗೆ ಅಪರಿಚಿತವೇ. ಮುಂಬೈಗೆ ತನ್ನದೇ ಆದ ವಿಶಿಷ್ಟತೆಯಿದೆ. ಇಂತಹ ಮುಂಬಯಿ ನಗರದ ಇರುಕಾದ ಅಪಾರ್ಟಮೆಂಟ್ ಒಂದರ ಅಡಿಗೆ ಮನೆಯಲ್ಲಿ ಸಿದ್ಧವಾಗಿ ಹೊರಬರುವ ''ಲಂಚ್ ಬಾಕ್ಸ್'' ಗಾಂಧೀ ಟೋಪೀ ಹಾಕಿದ, ಹಣೆಗೆ ನಾಮ ಇಟ್ಟುಕೊಂಡು ತುಕಾರಾಮನ ಭಜನೆ ಮಾಡುತ್ತ ತನ್ನ ಕಾಯಕ ಮಾಡುವ ಡಬ್ಬಾವಾಲಾನ ಸೈಕಲ್ ಕ್ಯಾರಿಯರ್ ನಲ್ಲಿ ನೇತಾಡುವುದರ ಮೂಲಕ ಈ ಚಿತ್ರ ತೆರೆದುಕೊಳ್ಳುತ್ತದೆ.
ಹಳ್ಳಿಗಳಲ್ಲಿ ಇರುವವರು ನಗರಗಳಲ್ಲಿ ಇರುವ ಜನ ತಮಗಿಂತ ಸುಖಿ
ಅಂದುಕೊಳ್ಳುತ್ತಾರೆ. ನಗರಗಳಲ್ಲಿರುವವರು ಮಹಾನಗರಗಳಲ್ಲಿರುವರು ತಮಗಿಂತ ಸುಖಿಗಳೆಂದೇ
ಭಾವಿಸಿರುತ್ತಾರೆ. ತಾನಿರುವ ಸ್ಥತಿಗಿಂತ ಭಿನ್ನವಾದ ಮತ್ತೊಂದು ಸ್ಥಿತಿಯೆಡೆಗೆ
ಆಕರ್ಷಿತನಾಗುವುದು ಮಾನಸವಸಹಜ ಗುಣಧರ್ಮ. ಹೀಗೆ ಸೌಲಭ್ಯಗಳ, ಅವಕಾಶಗಳ, ಸುಖದ
ಖಜಾನೆಗಳಾಗಿ ಕಂಡು ಎಲ್ಲೆಡೆಯಿಂದ ಜನರನ್ನು ಸೆಳೆಯುವ ಮಹಾನಗರಗಳು .. ತಾನು ಕೊಡುವ ಆ
ಸುಖಕ್ಕೆ ಸುಂಕವಾಗಿ ವಸೂಲು ಮಾಡುವ ಬೆಲೆ ಎಂಥದ್ದು..? ಎನ್ನುವ ಸಂಗತಿಯನ್ನು ಮೂರೇ ಮೂರು
ಪಾತ್ರಗಳ ಮೂಲಕ ಈ ಚಿತ್ರ ಹೇಳುತ್ತದೆ. ಮುಂಬೈನ ಲೋಕಲ್ ರೈಲು, ಡಬ್ಬಾವಾಲಾ ವ್ಯವಸ್ಥೆ
ಮುಂತಾದವುಗಳು ಅದಕ್ಕೆ ಪೂರಕ ಪಾತ್ರಗಳಾಗಿವೆ. ಕಳೆದೆರಡು ದಶಕಗಳಲ್ಲಿ ಬೆಂಗಳೂರು ಎಷ್ಟೇ ದೊಡ್ಡ ಮಹಾನಗರವಾಗಿ ಬೆಳೆದು ನಿಂತಿದ್ದರೂ ಕೂಡ ಮುಂಬೈ ನಗರದ ಲೋಕಲ್ ಟ್ರೈನ್, ಡಬ್ಬಾವಾಲಾಗಳು, ಚಾಳ್ ಗಳು ಮುಂತಾದ ಅನೇಕ ಸಂಗತಿಗಳು ಇಲ್ಲಿನವರಿಗೆ ಅಪರಿಚಿತವೇ. ಮುಂಬೈಗೆ ತನ್ನದೇ ಆದ ವಿಶಿಷ್ಟತೆಯಿದೆ. ಇಂತಹ ಮುಂಬಯಿ ನಗರದ ಇರುಕಾದ ಅಪಾರ್ಟಮೆಂಟ್ ಒಂದರ ಅಡಿಗೆ ಮನೆಯಲ್ಲಿ ಸಿದ್ಧವಾಗಿ ಹೊರಬರುವ ''ಲಂಚ್ ಬಾಕ್ಸ್'' ಗಾಂಧೀ ಟೋಪೀ ಹಾಕಿದ, ಹಣೆಗೆ ನಾಮ ಇಟ್ಟುಕೊಂಡು ತುಕಾರಾಮನ ಭಜನೆ ಮಾಡುತ್ತ ತನ್ನ ಕಾಯಕ ಮಾಡುವ ಡಬ್ಬಾವಾಲಾನ ಸೈಕಲ್ ಕ್ಯಾರಿಯರ್ ನಲ್ಲಿ ನೇತಾಡುವುದರ ಮೂಲಕ ಈ ಚಿತ್ರ ತೆರೆದುಕೊಳ್ಳುತ್ತದೆ.
ಯಾರಿಂದಲೂ ಯಾವುದನ್ನೂ ಅಪೇಕ್ಷೆ ಪಡದೇ ಇರುವಂತೆ ಕಾಣುವ, ಅಸ್ಪಷ್ಟ ಹಿನ್ನೆಲೆಯ ನಾಯಕ ಈ ಊಟದ ಡಬ್ಬಿಯಲ್ಲಿ ಪ್ರತಿದಿನ ಅಪರಿಚಿತ ಮಹಿಳಯಿಂದ ಬರುವ ಪತ್ರಕ್ಕಾಗಿ ಕಾಯತೊಡಗುತ್ತಾನೆ. ಬಯಸದೇ ಇದ್ದಕಡೆಯಿಂದ ಬರುವ ನಂಬಿಕೆ ಹಾಗೂ ಪ್ರೀತಿಯಿಂದ ಹೊಸ ಕನಸಿಗಳೆಡೆಗೆ ಹೆಜ್ಜೆ ಹಾಕುತ್ತಾನೆ.
''ತನಗೆ ವಯಸ್ಸಾಗಿದೆ'' ಅನ್ನುವ ವಾಸ್ತವದ ಅರಿವು ತನಗೆ ಉಂಟಾಗುವುದಕ್ಕೂ ಅವಕಾಶವಿಲ್ಲದಷ್ಟು ನಗರ ಜೀವನ ವ್ಯಕ್ತಿಯನ್ನು ಬ್ಯಸಿಯಾಗಿಟ್ಟಿರುತ್ತದೆ. ಆ ವಾಸ್ತವದ ಅರಿವಿನಿಂದ ಕಂಗಾಲಾಗುವ ನಾಯಕ ಒಮ್ಮಲೇ ಹೊಸದಾರಿಯತ್ತ ಹೊರಡುತ್ತಾನೆ.
ಮೇಲಿನ ಮನೆಯಲ್ಲಿನ ಹಿರಿಯ ಮಹಿಳೆಯಿಂದ ಹೊಸರುಚಿ ಅಡಿಗೆಗಳನ್ನು ಕಲಿತು
ತನ್ನ ಗಂಡನ ಮನಸ್ಸು ಗೆಲ್ಲಲು ಹೊರಡುವ ನಾಯಕಿ ತನ್ನ ದಾಂಪತ್ಯ ಮುರಿದುಬಿದ್ದಿರುವುದನ್ನು
ಒಪ್ಪಿಕೊಂಡಂತೆ ಕಂಡುಬರುತ್ತಾಳೆ. ತನ್ನ ತಾಯಿಯ ಆರ್ಥಿಕ ಸಂಕಷ್ಟ, ತಂದೆಯ ಅನಾರೋಗ್ಯ,
ನಿರ್ಲಕ್ಷಿಸುವ ಗಂಡನಿಂದ ಏಕತಾನತೆಗೆ ಬಿದ್ದಂತಿರುವ ನಾಯಕಿ.. ಆಧುನಿಕ ನಗರಜೀವನದ
ಕನ್ನಡಿಯಾಗಿ ನಿಲ್ಲುತ್ತಾಳೆ. things are not that bad as they seems to be
ಎನ್ನುವ ಒಂದು ಸಾಂತ್ವನ ನಾಯಕ ನಾಯಕಿಗೆ ಹೇಳಿದ್ದರೂ ಅದು ಒಂದಿಡೀ ಸಮೂಹಕ್ಕೆ ಹೇಳಿದಂತೆ
ಧ್ವನಿಸುತ್ತದೆ. ಕಷ್ಟಗಳೆಡೆಗಿನ ನಮ್ಮ ದೃಷ್ಟಿಕೋನದ ವಕ್ರತೆ ಸರಿ ಮಾಡಿಕೊಂಡಲ್ಲಿ
ಎಲ್ಲವೂ ಸರಿಯಾಗಿ ಕಾಣಬಹುದು.
ಆಧುನಿಕ ವಿಜ್ಞಾನ ಮನುಷ್ಯನ ಜೋಳಿಗೆಗೆ ಸೌಲಭ್ಯಗಳ ರಾಶಿಯನ್ನೇ ತಂದು ಹಾಕುತ್ತಿದೆ. ಅವುಗಳಲ್ಲಿ ವೈದ್ಯಕೀಯ ಸಲಕರಣೆ-ಸೌಲಭ್ಯಗಳಂತೂ ಅತಿ ಮುಖ್ಯವಾದವುಗಳು. ಈ ವೈದ್ಯಕೀಯ ಸೌಲಭ್ಯಗಳು ಮನುಷ್ಯನ ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ತುಂಬುವುದರಲ್ಲಿ ಯಾವುದೇ ಆಸಕ್ತಿಯನ್ನು ಹೊಂದಿರುವುದಿಲ್ಲ. ಕೇವಲ ರೋಗದ ಶುಷ್ರೂಷೆಯಷ್ಟೇ ಅವುಗಳ ಅಂತಿಮ ಉದ್ದೇಶ. ಇಂತ ಚಿಕಿತ್ಸಾ ವಿಧಾನಗಳು ಸತ್ತುಹೋದಬೇಕಾದ ಅನೇಕ ಜೀವಗಳನ್ನು ಉಳಿಸಿ ಮನುಷ್ಯರ ಆಯುಸ್ಸನ್ನು ದೀರ್ಘಗೊಳಿಸುತ್ತಿವೆ. ಆದರೆ ''ಜೀವನ'' ಮುಗಿದು ಹೋದ ಜೀವಗಳು ದೇಹವನ್ನು ಬಿಡದೇ ಹೋದಾಗ ಆ ದೇಹದ ಆರೈಕೆಯ ಸಲುವಾಗಿ ಬಲಿಯಾಗುವ, ತಮ್ಮ ಜೀವನನ್ನು ಕಳೆದುಕೊಳ್ಳುವ ಎರಡು ಜೀವಗಳು ಈ ಕಥೆಯಲ್ಲಿನ ಮತ್ತೊಂದು ಮಗ್ಗಲು. ಆ ಎರಡೂ ಜೀವ ಗಳು ಎತ್ತುವ ಪ್ರಶ್ನೆಗಳು ಕಾನೂನಿನ ದೃಷ್ಟಿಯಲ್ಲಿ ತಪ್ಪಾಗಿ ಕಂಡರೂ ಜೀವ ಸಂರಕ್ಷಿಸುವ ಆಧುನಿಕ ಶುಷ್ರೂಷಾ ವಿಧಾನಗಳು ಉಂಟುಮಾಡುವ ಸಂದಿಗ್ಧತೆ-ಧರ್ಮಸಂಕಟ ಆಧುನಿಕ ಮಹಾನಗರದ ಜೀವನದ ಮತ್ತೊಂದು ಮುಖ.
ಹೀಗೆ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ಈ ಚಿತ್ರ ಅಲ್ಲಲ್ಲಿ ಹಾಸ್ಯದ
ಹೊನಲ್ಲನ್ನು ಹರಿಸುತ್ತದೆ. ನಾಯಕ ಊಟದ ಡಬ್ಬಿಯ ಬರುವಿಕೆಗೆ ಕಾಯುವ ದೃಶ್ಯಗಳಲ್ಲಿ
ಪ್ರೇಕ್ಷಕ ಕೂಡ ನಾಯಕನಿಗಿಂತ ಉತ್ಸುಕತೆಯಿಂದ ಕಾಯುತ್ತಾನೆ. ನಾಯಕಿ ಪತ್ರ ಓದುತ್ತಾ
ನಗುವಾಗ ಪ್ರೇಕ್ಷಕ ಕೂಡ ಅವಳ ಸಂತೋಷದಲ್ಲಿ ಭಾಗಿಯಾಗುತ್ತಾನೆ. ಹೀಗೆ ಪ್ರೇಕ್ಷಕನನ್ನು
ಕಟ್ಟಿಹಾಕಿ ತನ್ನ ಜೊತೆಗೇ ಸೆಳೆದುಕೊಂಡು ಹೋಗುವ ಕಥೆ ಆಳಕ್ಕಿಳಿದಷ್ಟೂ ತನ್ನ
ತೀವ್ರತೆಯನ್ನು ಹೆಚ್ಚಿಸುತ್ತ ಹೋಗುತ್ತದೆ.
ಇರ್ಫಾನ್ ಖಾನ್ ತನ್ನ ವಯಸ್ಸಿಗಿಂತ ಹಿರಿಯನಾದ ಸರ್ಕಾರೀ ಕಛೇರಿಯ ಪಾತ್ರದಲ್ಲಿ ಒದಗಿಕೊಂಡಿರುವ ರೀತಿ, ನೈಜ ಧ್ವನಿಮುದ್ರಣ, ಶಾರ್ಪ್ ಆದ ಕ್ಯಾಮೆರಾ ಆಂಗಲ್ ಗಳಿಂದಾಗಿ ಪ್ರೇಕ್ಷಕನಿಗೆ ಸಿನೆಮಾ ನೋಡುತ್ತಿದ್ದೇವೆ ಅನ್ನುವ ಭಾವ ಹೊರಟು ಹೋಗಿ ನಿಜವಾಗಿಯೂ ಈ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎನ್ನುವ ಭಾವ ಮೂಡಿಸುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ.
ನವಾಜುದ್ದಿನ್ ಸಿದ್ದಿಕಿ, ನಿಮೀತ್ ಕೌರ್ ಇಬ್ಬರೂ ಇರ್ಫಾನ್ ಖಾನ್ ಗೆ ಪೈಪೋಟಿ ನೀಡಿ ತಮ್ಮ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ಇರ್ಫಾನ್ ಖಾನ್ ತನ್ನ ವಯಸ್ಸಿಗಿಂತ ಹಿರಿಯನಾದ ಸರ್ಕಾರೀ ಕಛೇರಿಯ ಪಾತ್ರದಲ್ಲಿ ಒದಗಿಕೊಂಡಿರುವ ರೀತಿ, ನೈಜ ಧ್ವನಿಮುದ್ರಣ, ಶಾರ್ಪ್ ಆದ ಕ್ಯಾಮೆರಾ ಆಂಗಲ್ ಗಳಿಂದಾಗಿ ಪ್ರೇಕ್ಷಕನಿಗೆ ಸಿನೆಮಾ ನೋಡುತ್ತಿದ್ದೇವೆ ಅನ್ನುವ ಭಾವ ಹೊರಟು ಹೋಗಿ ನಿಜವಾಗಿಯೂ ಈ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎನ್ನುವ ಭಾವ ಮೂಡಿಸುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ.
watch 'lunch box' on your own risk..you can fall in love for irfan's performance...
ಈ ಸಿನೆಮಾ ನೋಡಿದ ಮೇಲೆ ನನ್ನ ಸ್ನೇಹಿತೆಯೊಬ್ಬಳು ಹೇಳಿದ ಈ ಮಾತು ಈ ಚಿತ್ರದ one line ವಿಮರ್ಷೆಯೆಂದರೆ ಅತಿಶಯೋಕ್ತಿ ಏನಲ್ಲ.